Subscribe ನ್ಯೂಸಿಕ್ಸ್ ಕನ್ನಡ NewsicsKannada/YouTubenewsics.com
ಅಂಕೋಲಾ: ನನ್ನ ಮತ್ತು ಸಿದ್ದರಾಮಯ್ಯ ನಡುವೆ ಒಪ್ಪಂದವಾಗಿರುವುದು ನಿಜ, ನಮ್ಮ ಹೈಕಮಾಂಡ್ ಒಂದು ಒಪ್ಪಂದಕ್ಕೆ ತಂದಿದೆ. ಆದರೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ 5 ವರ್ಷ ಪೂರೈಸಬಾರದು ಎಂದು ಎಂದಿಗೂ ಹೇಳಲಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.ರಾಜ್ಯ ರಾಜಕಾರಣದ ಬಗ್ಗೆ ಸಿಎಂ ಬದಲಾವಣೆ ವಿಚಾರವಾಗಿ ಅವರು ಡಿ.19ರ ಶುಕ್ರವಾರ ತಾಲೂಕಿನ ಆಂದ್ದೆಯಲ್ಲಿ ಜಗದೀಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ರು, ಇ ವೇಳೆ ಮಾತನಾಡಿದ ಡಿಕೆಶಿ, ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಒಲವು ಇದ್ದ ಕಾರಣದಿಂದಲೇ ಮುಖ್ಯಮಂತ್ರಿ ಆಗಿದ್ದಾರೆ. ಎಲ್ಲವೂ ಹೈಕಮಾಂಡ್ ತೀರ್ಮಾನದಂತೆ ನಡೆಯುತ್ತಿದೆ. ನಮ್ಮಿಬ್ಬರ ನಡುವೆ ಒಂದು ಸ್ಪಷ್ಟ ಒಪ್ಪಂದವಾಗಿದೆ ಮತ್ತು ನಾವಿಬ್ಬರೂ ಮಾತನಾಡಿಕೊಂಡಿದ್ದೇವೆ. ಆ ಒಪ್ಪಂದದಂತೆಯೇ ನಾನು ನಡೆದುಕೊಳ್ಳುತ್ತೇನೆ ಮತ್ತು ಪಕ್ಷದ ನಿರ್ಧಾರಕ್ಕೆ ತಲೆ ಬಾಗಿ ಹೈಕಮಾಂಡ್ ಸೂಚನೆ ಪಾಲಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.ಆಂದ್ಲೆಯ ಜಗದೀಶ್ವರಿ ದೇವಿ ಇಷ್ಟಾರ್ಥ ಈಡೇರಿಸಿದೆ. ಈಗಲೂ ದೇವಿ ಬಲಭಾಗದಿಂದ ಹಿಂಗಾರ ಪ್ರಸಾದ ನೀಡುವ ಮೂಲಕ ಶುಭಸೂಚನೆ ನೀಡಿದೆ. ದೈವದ ಎದುರಿನ ವಿಚಾರಗಳನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದೇನೆ ಎಲ್ಲಿಯೂ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.ಮುಖ್ಯಮಂತ್ರಿ ಸ್ಥಾನದ ಇಚ್ಛೆ ಹಾಗೂ ಅಧಿಕಾರ ಹಸ್ತಾಂತರದ ದಿನಾಂಕ ನಿಗದಿ ಆಗಿದೆಯೇ ಎಂಬ ಮಾಧ್ಯಮದವರ ನೇರ ಪ್ರಶ್ನೆಗೆ ಡಿಕೆಶಿ ಯಾವುದೇ ಉತ್ತರ ನೀಡಲಿಲ್ಲ. ಬದಲಾಗಿ, ಅರ್ಥಗರ್ಭಿತವಾಗಿ ಮುಗುಳನಕ್ಕು ಅಲ್ಲಿಂದ ತೆರಳಿದರು.
ಆಂದ್ಲೆಯ ಜಗದೀಶ್ವರಿ ಅಮ್ಮನವರ ಮುಂದೆ ಐದು ಪ್ರಶ್ನೆಗಳನ್ನು ಹಾಕಿರುವ ಡಿಸಿಎಂ ಡಿಕೆಶಿ ಸ್ವಯಂ ರಾಜಕೀಯ, ಕಾನೂನು, ಕೌಟುಂಬಿಕ ವಿಚಾರಗಳ ಸಂಬಂಧಿಸಿದಂತೆ ಐದು ಪ್ರಶ್ನೆಯನ್ನು ಹಾಕಿದ್ದಾರೆ. ಎನ್ನಲಾಗಿದ್ದು, ಐದು ಪ್ರಶ್ನೆಗಳಿಗೆ ತಾಯಿ ಪ್ರಸಾದ ನೀಡಿದ್ದಾಳೆ ಎನ್ನಲಾಗಿದ್ದು, ಸಿಎಂ ಸ್ಥಾನದ ಪ್ರಶ್ನೆಗೆ ತಾಯಿಯ ಉತ್ತರದ ಬಗ್ಗೆ ಕೇಳಿದ ಮಾದ್ಯಮದವರಿಗೆ ಕಿರುನಕ್ಕು ನಿರ್ಗಮಿಸಿದರು ಎನ್ನಲಾಗಿದೆ. ಅಮವಾಸ್ಯೆಯ ನಿಮಿತ್ತ ಗೋಕರ್ಣದ ಮಹಾಬಲೇಶ್ವರನಿಗೆ ಹಾಗೂ ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿಕೊಂಡಿದ್ದೇನೆ.ನಂತರ ಇಲ್ಲಿಯ ಜಗದೀಶ್ವರಿ ದೇಗುಲಕ್ಕೆ ಬಂದಿದ್ದೇನೆ. ಈ ಹಿಂದೆ ಸಂಕಷ್ಟದ ಪರಿಸ್ಥಿತಿಯಲ್ಲಿ ದೇವಿಯಲ್ಲಿ ಕೆಲ ವರ್ಷದ ಹಿಂದೆ ಹಲವು ಬೇಡಿಕೆಗಳನ್ನು ಇಟ್ಟುಕೊಂಡಿದ್ದೆ, ಆ ಎಲ್ಲ ಬೇಡಿಕೆ ಈಡೆರಿದಕ್ಕೆ ಇಂದು ದೇವಿಯ ಆಶಿರ್ವಾದ ಪಡೆಯಲು ಬಂದಿದ್ದೆನೆ.ಅದರಂತೆಯೇ ಇಂದು ಸಹ ಕೆಲವು ಬೇಡಿಕೆಗಳನ್ನು ಇಟ್ಟಿದ್ದೇನೆ ಅದಕ್ಕೆ ದೇವಿ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾಳೆ ಎಂದರು.