Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಉತ್ತರ ಪ್ರದೇಶ : ಮಗನೇ ತನ್ನ ಹೆತ್ತವರನ್ನು ಹೊಡೆದು ಕೊಂದು ಗರಗಸದಿಂದ ಅವರ ದೇಹಗಳನ್ನು ತುಂಡರಿಸಿ, ಹತ್ತಿರದ ನದಿಗೆ ಎಸೆದ ಘಟನೆ ಉತ್ತರ ಪ್ರದೇಶದ ಜಾನ್ಪುರದಲ್ಲಿ ನಡೆದಿದೆ.
ಕಾಣೆಯಾದ ದಂಪತಿಯ ಹುಡುಕಾಟವು ಪೊಲೀಸರನ್ನು ಅವಳಿ ಕೊಲೆವರೆಗೆ ಕೊಂಡೊಯ್ದಿತ್ತು. ತಂದೆಯ ಹಠಮಾರಿತನ ಹಾಗೂ ಮಗನ ಕೋಪ ಹೇಗೆ ಒಂದು ದುರಂತಕ್ಕೆ ಕಾರಣಯಿತು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ. ಎಂಜಿನಿಯರ್ ಆಗಿರುವ ಅಂಬೇಶ್ ತನ್ನ ತಂದೆ ಶ್ಯಾಮ್ ಬಹದ್ದೂರ್(62), ತಾಯಿ ಬಬಿತಾ(60) ಅವರನ್ನು ಕೊಲೆ ಮಾಡಿ, ಗರಗಸದಿಂದ ದೇಹಗಳನ್ನು ಕತ್ತರಿಸಿ ನದಿಗೆ ಎಸೆದ ಆರೋಪದ ಮೇಲೆ ಬಂಧಿಸಿದ್ದಾರೆ.
ಅಂಬೇಷ್ ಮತ್ತು ಆತನ ಹೆತ್ತವರ ನಡುವೆ ಮುಸ್ಲಿಂ ಪತ್ನಿಯ ವಿಷಯವಾಗಿ ಜಗಳ ನಡೆಯುತ್ತಿತ್ತು, ಅವರು ಆಕೆಯನ್ನು ಮನೆಯೊಳಗೆ ಸೇರಿಸಲು ನಿರಾಕರಿಸಿದ್ದರು. ಅಂಬೇಷ್ ಮತ್ತು ಆತನ ಪತ್ನಿ ಅಂತಿಮವಾಗಿ ಬೇರೆಯಾಗಲು ನಿರ್ಧರಿಸಿದ್ದರು. ಮತ್ತು ಜೀವನಾಂಶ ಪಾವತಿಸಲು ಅವರಿಗೆ ಹಣದ ಅಗತ್ಯವಿತ್ತು. ಆತ ತನ್ನ ತಂದೆಯನ್ನು ಕೇಳಿದ್ದ, ಆದರೆ ಅವರು ನಿರಾಕರಿಸಿದ್ದಾಗಿ ಹೇಳಲಾಗಿದೆ. ಇದು ಅವರ ಕೊನೆಯ ಜಗಳಕ್ಕೆ ಕಾರಣವಾಯಿತು, ಅದು ಎರಡು ಸಾವುಗಳಲ್ಲಿ ಕೊನೆಗೊಂಡಿದೆ.