Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಪಟಣಂತಿಟ್ಟ: ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇತಿಹಾಸ ರಚನೆಯಾಗಿದೆ. ಯೂಡಿಎಫ್(ಕಾಂಗ್ರೆಸ್) ಭರ್ಜರಿ ಗೆಲುವು ಸಾಧಿಸಿದೆ. ಇಷ್ಟೇ ಅಲ್ಲ ಇದೇ ಮೊದಲ ಬಾರಿಗೆ ತಿರುವಂತಪುರಂ ಕಾರ್ಪೋರೇಶನ್ ಬಿಜೆಪಿ ಪಾಲಾಗಿದೆ.
ಪಟಣಂತಿಟ್ಟ ಮುನ್ಸಿಪಾಲಿಟಿಯಲ್ಲಿ ಈ ಬಾರಿಯೂ ಎಲ್ಡಿಎಫ್ ಗೆಲುವು ಸಾಧಿಸಲಿದೆ ಎಂದು ಎಲ್ಡಿಎಫ್ ಸ್ಥಳೀಯ ಮುಖಂಡ ಭಾರಿ ಆತ್ಮವಿಶ್ವಾಸದಲ್ಲಿ ಹೇಳಿದ್ದಾರೆ. ಪ್ರಚಾರದ ವೇಳೆಯೂ ಜನರಲ್ಲಿ ನಿಮ್ಮ ಮತ ಬೇರೆ ಪಕ್ಷದ ಅಭ್ಯರ್ಥಿಗಳಿಗೆ ಹಾಕಿ ವ್ಯರ್ಥ ಮಾಡಬೇಡಿ, ಕಾರಣ ಈ ಬಾರಿಯೂ ಎಲ್ಡಿಎಫ್ ಅಭೂತಪೂರ್ವ ಗೆಲುವು ದಾಖಲಿಸಿದೆ.
ಜೋಶ್ನಲ್ಲಿ ಆಪ್ತರ ಬಳಗದ ಜೊತೆಗೂ ಬೆಟ್ ಮಾಡಿ ಹೇಳಿದ್ದರು. ಆದರೆ ಗೆಳೆಯರು, ಆಪ್ತರು ಈ ಬಾರಿ ಎಲ್ಡಿಎಫ್ ಸೋಲು ಕಾಣಲಿದೆ ಎಂದು ಕಿಚಾಯಿಸಿದ್ದಾರೆ. ಇಷ್ಟಕ್ಕೆ ರೊಚ್ಚಿಗೆದ್ದ ಬಾಬು ವರ್ಗೀಸ್ ಸೋತರೆ ಮೀಸೆ ಬೋಳಿಸುತ್ತೇನೆ ಎಂದು ಹಲವು ಬಾರಿ ಪುನರುಚ್ಚರಿಸಿದ್ದರು. ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಪಟಣಂತಿಟ್ಟದಲ್ಲಿ ಎಲ್ಡಿಎಫ್ ಹೀನಾಯ ಸೋಲು ಕಂಡಿದೆ. ಪಟಣಂತಿಟ್ಟ ಮಾತ್ರವಲ್ಲ ಬಹುತೇಕ ಕಡೆ ಎಲ್ಡಿಎಫ್ಗೆ ಸೋಲಾಗಿದೆ. ಈ ಸೋಲಿನ ಬೆನ್ನಲ್ಲೇ ಬಾಬು ವರ್ಗೀಸ್ ಬಳಿ ಆಪ್ತರು, ಗೆಳೆಯರು ಬೆಟ್ ಮಾಡಿ ಹೇಳಿದ್ದ ಮಾತು ಉಳಿಸಿಕೊಳ್ಳುವಂತೆ ಸೂಚಿಸಿದ್ದಾರೆ. ವ್ಯಾಟ್ಸಾಪ್ ಗ್ರೂಪ್ಗಳಲ್ಲೂ ಮುಖಂಡನ ಬೆಟ್ ಕುರಿತು ಭಾರಿ ಚರ್ಚೆಯಾಗಿದೆ. ಇದರ ಬೆನ್ನಲ್ಲೇ ಬಾಬು ವರ್ಗೀಸ್ ಮೀಸೆ ಬೋಳಿಸಿ ಮಾತು ಉಳಿಸಿಕೊಂಡಿದ್ದಾರೆ