Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಹುಲಿಗೆಮ್ಮ ದೇವಿ ಆರಾಧಾನೆ ಮಾಡುವ ಗದಗ ನಗರ ರಾಚೋಟೇಶ್ವರ ನಗರದ ಬೈಲಮ್ಮ ಎಂಬ ಜೋಗತಿ ಸಿಎಂ ಪಟ್ಟದ ಬಗ್ಗೆ ಭವಿಷ್ಯ ನುಡಿದಿದ್ದು, ಸಿದ್ದರಾಮಯ್ಯ ಅವರ ಹತ್ತಿರ ಯಾವುದೇ ಕಪಟತನವಿಲ್ಲ. ಹೀಗಾಗಿ ಅಣ್ಣ ಹೇಗೆ ತಮ್ಮನಿಗಾಗಿ ಬಿಟ್ಟು ಕೊಡ್ತಾನೋ, ಹಾಗೆಯೇ ಸಿದ್ದರಾಮಯ್ಯ ಸಂತೋಷದಿಂದ ಮುಖ್ಯಮಂತ್ರಿ ಸ್ಥಾನವನ್ನು ಡಿ.ಕೆ.ಶಿವಕುಮಾರ್ಗೆ ಬಿಟ್ಟುಕೊಡ್ತಾರೆ ಎಂದು ಹೇಳಿದ್ದಾರೆ. ಅಲ್ಲದೆ, ಇಬ್ಬರ ಕಚ್ಚಾಟದಲ್ಲಿ ಮೂವರನೇವರು ಮೂಗು ತೋರಿಸುತ್ತಿದ್ದಾರೆ. ಆದ್ರೆ ಅವರಿಗೆ ಯಾವುದೇ ಸಿಎಂ ಸ್ಥಾನ ಸಿಗೋದಿಲ್ಲ. ಇನ್ನು, ಎರಡೂವರೆ ತಿಂಗಳಲ್ಲಿ ಮುಂದಿನ ಸಿಎಂ ಆಗಿ ಡಿ.ಕೆ. ಶಿವಕುಮಾರ್ ಅಧಿಕಾರ ವಹಿಸಿಕೊಳ್ಳತ್ತಾರೆಂದು ಭವಿಷ್ಯ ನುಡಿದಿದ್ದಾರೆ.
ಗದಗಿನ ಭೈಲಮ್ಮ ಬಾಳಮಣ್ಣವರ ಭವಿಷ್ಯವನ್ನು ನುಡಿದಿದ್ದಾರೆ. ಗದ್ದುಗೆ ಹಾಕಿ ಹುಲಿಗೆಮ್ಮ ದೇವಿ ಕೊಡ ಎತ್ತುವ ಮೂಲಕ, ಭೈಲಮ್ಮ ಜೋಗತಿ ಭವಿಷ್ಯವನ್ನು ನುಡಿಯುವ ಪದ್ದತಿಯಿದೆ. ಎರಡು ತಿಂಗಳ ಒಳಗೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಜೋಗತಿ ಭವಿಷ್ಯವನ್ನು ನುಡಿದಿದ್ದರು. ’ಬಿಟ್ಟು ಕೊಡ್ತಾರ, ಎಲ್ಲೂ ಮಿಸುಕಬೇಡ’ ಎನ್ನುವ ಅರ್ಥದಲ್ಲಿ ಭೈಲಮ್ಮ ಜೋಗತಿ ಹೇಳಿದ್ದರು.