Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಮುಸ್ಲಿಂ ನಾಯಕರೊಬ್ಬರು ಹಿಂದೂ ದೇವಾಲಯವನ್ನು ಸಂಪೂರ್ಣ ಹಣ ದೇಣಿಗೆ ನೀಡಿ ನಿರ್ಮಿಸಿ ಮಾದರಿಯಾಗಿರುವ ಘಟನೆ ರಾಮನಗರದ ಚನ್ನಪಟ್ಣಣ ತಾಲೂಕಿನ ಮಂಗಳವಾರಪೇಟೆಯಲ್ಲಿ ನಡೆದಿದೆ.
ಸೈಯದ್ ಸದಾತ್ವುಲ್ಲಾ ಸಖಾಫ್ ಎಂಬ ಮುಸ್ಲಿಂ ನಾಯಕ ಈ ಕೆಲಸವನ್ನು ಮಾಡಿದ್ದಾರೆ. ಮಂಗಳವಾರಪೇಟೆಯಲ್ಲಿ ತಾವೇ ಸ್ವತಃ ದೇವಾಲಯ ನಿರ್ಮಿಸಬೇಕೆಂದು ತೀರ್ಮಾನಿಸಿ ಹಿಂದೂ ನಾಯಕರನ್ನು ಕೇಳಿದ್ದು, ಇದಕ್ಕೆ ಗ್ರಾಮಸ್ಥರು ಒಪ್ಪಿಗೆ ಸೂಚಿಸಿದ ನಂತರ ಹಣ ನೀಡಿ ಆರು ವರ್ಷಗಳಿಂದ ದೇವಾಲಯದ ನಿರ್ಮಾಣ ಕಾರ್ಯವನ್ನು ನೋಡಿಕೊಂಡಿದ್ದಾರೆ.
ಸುಮಾರು 3 ಕೋಟಿ ವೆಚ್ಚದಲ್ಲಿ ಬಸವೇಶ್ವರ ದೇವಾಲಯವನ್ನು ನಿರ್ಮಿಸಿದ್ದು, ಗ್ರಾಮಸ್ಥರು ಅವರ ಸಮ್ಮುಖದಲ್ಲೇ ಉದ್ಘಾಟನೆಯನ್ನು ನೆರವೇರಿಸಿದ್ದಾರೆ. ಈ ವೇಳೆ ಮಾತನಾಡಿದ ಸೈಯದ್ ಸದಾತ್ವುಲ್ಲಾ ಸಖಾಫ್ ತಮ್ಮ ತಂದೆ ಹಾಗೂ ತಾಯಿ ಎಲ್ಲರೂ ಕೂಡಿ ಬಾಳಬೇಕು ಎಂಬುದನ್ನು ಕಲಿಸಿಕೊಟ್ಟಿದ್ದು, ಅದರಂತೆ ತನಗೆ ದೇವಾಲಯ ನಿರ್ಮಿಸಬೇಕೆಂಬ ಆಸೆ ಇತ್ತು, ಈ ಹಿಂದೆಯೂ ಒಂದು ದೇವಾಲಯವನ್ನು ನಿರ್ಮಿಸಿದ್ದು ಈಗ ಮಂಗಳವಾರಪೇಟೆಯಲ್ಲಿ ದೇವಾಲಯ ಮಾಡಿದ್ದೇನೆ ಎಂದಿದ್ದಾರೆ.
ಅಲ್ಲದೇ ಶಿವ ತನ್ನ ಕೈನಲ್ಲಿ ಈ ಕೆಲಸ ಮಾಡಿಸಿದ್ದಾನೆ ಎಂದಿರುವ ಇವರು ಕೋಮುಗಲಭೆ ಮಾಡುವವರಿಗೂ ಆ ಶಿವ ಒಟ್ಟಿಗೆ ಬಾಳುವ ಬುದ್ದಿಯನ್ನು ಕೊಡಲಿ ಎಂದಿದ್ದಾರೆ.
ಬಗೆಹರಿಯದ ಜಮೀನು ಸಮಸ್ಯೆ; ಡಿಸಿ ಕಚೇರಿ ಎದುರು ಆತ್ಮಹತ್ಯೆಗೆ ಯತ್ನಿಸಿದ ರೈತ