Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ನಗರದ ಹಲವೆಡೆ ಶನಿವಾರದಿಂದ (ಅ.25) ಮತ್ತೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ನಗರದಾದ್ಯಂತ ವಿವಿಧ ಸಬ್ಸ್ಟೇಷನ್ಗಳು ಮತ್ತು 11 ಕೆವಿ ಫೀಡರ್ ಲೈನ್ಗಳಲ್ಲಿ ನಿರ್ವಹಣೆ, ದುರಸ್ತಿ ಮತ್ತು ಅಪ್ಗ್ರೇಡ್ ಕೆಲಸಗಳನ್ನು ಕೈಗೊಳ್ಳಲು ಬೆಂಗಳೂರಿನಾದ್ಯಂತ ಹಲವಾರು ಪ್ರದೇಶಗಳಲ್ಲಿ ಈ ತಿಂಗಳು ವಿದ್ಯುತ್ ಕಡಿತಗೊಳ್ಳಲಿದೆ. ಸುಮಾರು 9 ದಿನಗಳವರೆಗೆ ವಿದ್ಯುತ್ ಕಡಿತಗೊಳ್ಳಲಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಅಕ್ಟೋಬರ್ 23ರಿಂದ ಅಕ್ಟೋಬರ್ 31ರ ವರೆಗೆ ವಿದ್ಯುತ್ ಕಡಿತವನ್ನು ಘೋಷಿಸಿದ್ದು, ಈ ಸಮಯದಲ್ಲಿ ಜನರು ಸಹಕರಿಸುವಂತೆ ಮನವಿ ಮಾಡಿದೆ.
ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ 66/11 ಕೆವಿ ಕಂಠೀರವ ಉಪಕೇಂದ್ರ ವ್ಯಾಪ್ತಿಯಲ್ಲಿ ದಿನಾಂಕ 25.10.2025 (ಶನಿವಾರ) ರಂದು ಬೆಳಗ್ಗೆ 10:00 ಗಂಟೆಯಿಂದ ಸಂಜೆ 05:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ
ಕಬ್ಬನ್ಪೇಟೆ 5ನೇ ಅಡ್ಡರಸ್ತೆ, 6ನೇ ಅಡ್ಡರಸ್ತೆ, 3ನೇ ಅಡ್ಡರಸ್ತೆ, 4ನೇ ಅಡ್ಡರಸ್ತೆ, ಚೌಳಗಳ್ಳಿ ಎ, ಬಿ, ಸಿ, ಡಿ ಗಲ್ಲಿ, ಆರ್ಬಿಐ, ನೃಪತುಂಗ ರಸ್ತೆ, ಯುವಿಸಿಇ, ಕೃಷಿ ಕಚೇರಿ, ಸರ್ಕಾರಿ ಕಲಾ ಕಾಲೇಜು, ಮಾರ್ಥಾಸ್ ಆಸ್ಪತ್ರೆ, ಸುಂಕಲ್ಪೇಟೆ, ನಗರ್ತ್ಪೇಟೆ ಮುಖ್ಯರಸ್ತೆ, ಕೆಎಎಸ್ ಲೇನ್, ಸಿ ಲೇನ್ ಎ’ಲೇನ್ ಡಿ ಲೇನ್ ಪಿಆರ್ಎಸ್ ಲೇನ್, 13ನೇ ಅಡ್ಡರಸ್ತೆ, 14ನೇ ಅಡ್ಡರಸ್ತೆ, ಕಬ್ಬನ್ಪೇಟೆಯ 15ನೇ ಅಡ್ಡರಸ್ತೆ, ಕೆಜಿ ರಸ್ತೆಯ ಒಂದು ಭಾಗ, ಒಟಿಸಿ ರಸ್ತೆ, ಶಾರದಾ ರಂಗಮಂದಿರದ ಹಿಂಭಾಗ, ಎಸ್ಪಿ ರಸ್ತೆ, ಎಸ್ಜೆಪಿ ರಸ್ತೆ, ಧರ್ಮರಾಯ ಸ್ವಾಮಿ ದೇವಸ್ಥಾನ ರಸ್ತೆ, ಆದರ್ಶ ಶಂಗ್ರಿಲ್ಲಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
66/11kV NGEF MUSS ಉಪಕೇಂದ್ರ ವ್ಯಾಪ್ತಿಯಲ್ಲಿ ದಿನಾಂಕ 25.10.2025 (ಶನಿವಾರ) ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಜೋಗುಪಾಳ್ಯ ಇಲ್ಪೆ ತೊಪ್ಪು, ಕಾರ್ ಸ್ಟ್ರೀಟ್, ಬಜಾರ್ ಸ್ಟ್ರೀಟ್, ಜೋಗುಪಾಳ್ಯ ಮುಖ್ಯ ರಸ್ತೆ, ರಾಂಕಾ ಕೋರ್ಟ್, ಆರ್ಟಿಲರಿ ರಸ್ತೆ, ಗೌತಂಪುರ, ಕೇಂಬ್ರಿಜ್ ರಸ್ತೆ, RMZ ಮಿಲೇನಿಯಾ, ಹಲಸೂರು, ಹಲಸೂರು ರಸ್ತೆ, ಕೆನರಾ ಬ್ಯಾಂಕ್, ಅಜಂತಾ ಟ್ರಿನಿಟಿ ಸರ್ಕಲ್, ಹೆಚ್ಎಎಲ್ 2ನೇ ಹಂತ, ಮದ್ರಾಸ್ 1ನೇ ಹಂತ ಬೆನ್ನಿಗನ ಹಳ್ಳಿ, ಎ ನಾರಾಯಣಪುರ, ಬಿ ನಾರಾಯಣಪುರ, ಕಗ್ಗದಾಸಪುರ, ಆಕಾಶ್ ನಗರ, ಪೈ ಎಲ್/ಓ, ಉದಯನಗರ, ಬೈರಸಂದ್ರ, ಸಿವಿ ರಾಮನಗರ, ಎನ್ಜಿಇಎಫ್ ಲೇಔಟ್ನ ಪೂರ್ವ, ಸದಾನಂದನಗರ, ಕಸ್ತೂರಿನಗರ, ಭುವನೇಶ್ವರಿ ನಗರ, ವರ್ತೂರು ರಸ್ತೆ, ನಾಗವಾರಪಾಳ್ಯ ನಾಗಪ್ಪ ರೆಡ್ಡಿ ಲೇಔಟ್, ಅಬ್ಬಯ್ಯ ಲಾಔಟ್. ಧರ್ಮೋಹಲ್ಲಾ, ವಿಜಿನಾಪುರ ಪೈ ಲೇಔಟ್, ಉದಯನಗರ ನಗರ, ಗಂಗಪ್ಪ ಲೇಔಟ್, Bcie ಎಸ್ಟೇಟ್ ಸದಾನಂದ ನಗರ, ಕಸ್ತೂರಿ ನಗರ, ಕೃಷ್ಣನಪಾಳ್ಯ ಸುದ್ದುಗುಂಟೆ ಪಾಳ್ಯ ಆರ್ಮ್ಝೋಲ್ಡ್ ಮಡ್ರೆಸ್ ರಸ್ತೆ, ನಾಗವರಪಾಳ್ಯ ಕುವೆಂಪು ಬೀದಿ, ವಿವೇಕಾನಂದ ಬೀದಿ, ಕೊಂಡಪ ರೆಡ್ಡಿ ಲೇಔಟ್, ಅಂಕಪ್ಪ ರೆಡ್ಡಿ ಲೇಔಟ್, ಶಿವ ದೇವಸ್ಥಾನ ರಸ್ತೆ, ಅಯ್ಯಪ್ಪ ದೇವಸ್ಥಾನ ರಸ್ತೆ ಏರ್ ಫೋರ್ಸ್ ಕ್ವಾರ್ಟರ್ಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೂ ಕೂಡ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಒಂಬತ್ತು ದಿನಗಳವರೆಗೆ ವಿದ್ಯುತ್ ಕಡಿತವು 8 ಗಂಟೆಗಳ ಕಾಲ ಇರುತ್ತದೆ. ಆದರೆ, ಪ್ರತಿ ಪ್ರದೇಶದ ಕೆಲಸದ ಪ್ರಗತಿಯನ್ನು ಆಧರಿಸಿ ಸಮಯ ಬದಲಾಗುವ ನಿರೀಕ್ಷೆಯಿದೆ.
ನಿವಾಸಿಗಳಿಗೆ ಉಂಟಾಗುವ ಅಡಚಣೆಯನ್ನು ಕಡಿಮೆ ಮಾಡಲು ಈ ವಿದ್ಯುತ್ ಕಡಿತವನ್ನು ಹಂತ ಹಂತವಾಗಿ ಕೈಗೊಳ್ಳಲಾಗುವುದು ಎಂದು ಬೆಸ್ಕಾಂ ತಿಳಿಸಿದೆ.
ಬೆಂಗಳೂರಿನ ಕೆಲವು ಭಾಗಗಳು ಎರಡು ತಿಂಗಳಿನಿಂದ ವಿದ್ಯುತ್ ಕಡಿತವನ್ನು ಎದುರಿಸುತ್ತಿವೆ. ಜನರು ವಿಶೇಷವಾಗಿ ವಾರಾಂತ್ಯಗಳಲ್ಲಿ ಎಂಟರಿಂದ ಒಂಬತ್ತು ಗಂಟೆಗಳ ಕಾಲ ವಿದ್ಯುತ್ ಕಡಿತವನ್ನು ಎದುರಿಸುತ್ತಿದ್ದಾರೆ.
ಆಗಸ್ಟ್ನಿಂದ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಲಿಮಿಟೆಡ್ (ಕೆಪಿಟಿಸಿಎಲ್) ಮತ್ತು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ನಗರಗಳಲ್ಲಿ ವಿದ್ಯುತ್ ಕಡಿತಕ್ಕೆ ಸೂಚನೆಗಳನ್ನು ನೀಡುತ್ತಿವೆ.
Gold Rate Today Bangalore: ಚಿನ್ನದ ಬೆಲೆ ಅಲ್ಪ ಏರಿಕೆ; ಬೆಳ್ಳಿ ಬೆಲೆ ಎಷ್ಟಿದೆ?