newsics.com
ನೆಲಮಂಗಲ(ಬೆಂಗಳೂರು): ಮಾದನಾಯಕನಹಳ್ಳಿಯಲ್ಲಿರುವ ಪ್ರೆಸ್ಟೀಜ್ ಅಪಾರ್ಟ್ಮೆಂಟ್ 24ನೇ ಮಹಡಿಯಿಂದ ಜಿಗಿದು ಭಾರತೀಯ ವಾಯುಪಡೆ ಎಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಲೋಕೆಶ್ ಪವನ್ ಕೃಷ್ಣ (26) ಆತ್ಮಹತ್ಯೆ ಮಾಡಿಕೊಂಡ ಯುವಕ. ಲೋಕೇಶ್ ಪವನ್ ಅವರು ಹಲಸೂರು ಮಿಲಿಟರಿ ಕ್ವಾರ್ಟರ್ಸ್ನಲ್ಲಿ ವಾಸಿಸುತ್ತಿದ್ದರು.
ಭಾನುವಾರ ಸಂಜೆ ತಮ್ಮ ಸಹೋದರಿ ಲಕ್ಷ್ಮೀ ಅವರನ್ನ ಭೇಟಿಯಾಗಿದ್ದರು. ಆದರೆ ಸಹೋದರಿ ಜತೆ ಅವರು ಜಗಳವಾಡಿದ್ದರು ಎನ್ನಲಾಗಿದೆ.
ಸಹೋದರಿ ಜತೆ ಜಗಳವಾಡಿದ ಬಳಿಕ ಅವರ ಮನಸ್ಥಿತಿ ಹಾಳಾಗಿತ್ತು. ಅವರು ಪ್ರೆಸ್ಟೀಜ್ ಜಿಂದಾಲ್ ಸಿಟಿ ಅಪಾರ್ಟ್ಮೆಂಟ್ನ 24 ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡು ದಿನಗಳ ಹಿಂದೆ ಲೋಕೇಶ್ ಅಕ್ಕನ ಭಾವನ ಮನೆಗೆ ಬಂದಿದ್ದ. ಅಕ್ಕ ಭಾವ ಮನೆಯಲ್ಲಿ ಇಲ್ಲದ ವೇಳೆ ಲೋಕೇಶ್ ಆತ್ಮಹತ್ಯೆ ಶರಣಾಗಿದ್ದಾನೆ. ಎರಡು ದಿನ ಮನೆಯಲ್ಲಿದ್ದು ಮೂರನೇ ದಿನ ಲೋಕೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಯಾವ ವಯಸ್ಸಿನವರು ಎಷ್ಟು ಗಂಟೆ ನಿದ್ದೆ ಮಾಡಿದ್ರೆ ಆರೋಗ್ಯ ಸರಿ ಇರುತ್ತೆ.?