newsics.com
ಪ್ರಿಯಕರನನ್ನ ಮದುವೆಯಾಗಲು ಮನೆಯಿಂದ ಓಡಿಹೋಗಿದ್ದ ಯುವತಿ ಒಂದು ವಾರದ ನಂತರ ಆಕೆ ಇನ್ನೊಬ್ಬ ವ್ಯಕ್ತಿಯನ್ನ ಮದುವೆಯಾಗಿ ಮನೆಗೆ ಮರಳಿದ್ದಾಳೆ. ಈ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದ.
ಆಗಸ್ಟ್ 23 ರಂದು ಎಂಐಜಿ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಶ್ರದ್ಧಾ, ಮನೆ ಬಿಟ್ಟು ಸೀದಾ ತನ್ನ ಪ್ರಿಯಕರ ಸಾರ್ಥಕ್ನನ್ನ ಮೀಟ್ ಆಗೋದಕ್ಕೆ ಹೋಗಿದ್ದಳು. ರೈಲ್ವೆ ನಿಲ್ದಾಣ ಒಂದರಲ್ಲಿ ಸುಮಾರು ಹೊತ್ತು ಕಾದ್ರು. ಸಾರ್ಥಕ್ ಬರೋ ಮೂಮೆಂಟ್ ಕಾಣಿಲ್ಲ. ಎಷ್ಟೇ ಹೊತ್ತು ಕಾದರೂ ಆತ ಬರಲೇ ಇಲ್ಲ.
ಇದರಿಂದಾಗಿ ಶ್ರದ್ಧಾಗೆ ದಿಕ್ಕೇ ತೋಚದಂತಾಗಿತ್ತು. ಶ್ರದ್ಧಾ ವಾಪಸ್ ಮನೆಗೆ ಹೋಗದೇ ಯಾವುದೇ ಗುರಿ ತೋಚದೆ ಸುಮ್ಮನೆ ರೈಲು ಹತ್ತಿ ಪ್ರಯಾಣಿಸಿದ್ಲು. ನಂತರ ಶ್ರದ್ಧಾ ಇಂದೋರ್ನ ತನ್ನ ಕಾಲೇಜಿನಲ್ಲಿ ಕೆಲಸ ಮಾಡ್ತಿದ್ದ ಎಲೆಕ್ಟ್ರಿಷಿಯನ್ ಕರಣ್ದೀಪ್ನನ್ನು ಭೇಟಿಯಾಗ್ತಾಳೆ. ಶ್ರದ್ಧಾ ಒಬ್ಬಂಟಿಯಾಗಿ ಕುಳಿತಿದ್ದನ್ನ ಕಂಡ ಕರಣ್ದೀಪ್ ಅವಳ ಬಳಿಗೆ ಬಂದು ಏನಾಯ್ತು ಅಂತ ವಿಚಾರಿಸಿದ್ದ.. ಆಗ ಅವಳ ಮಾತು ಕೇಳಿದ ನಂತರ ಮನೆಗೆ ಹಿಂತಿರುಗಿ ಪೋಷಕರಿಗೆ ನಡೆದ ಘಟನೆ ವಿವರಿಸುವಂತೆ ಶ್ರದ್ಧಾಗೆ ಸಲಹೆ ಕೊಟ್ಟಿದ್ದ.. ಆದ್ರೆ ಶ್ರದ್ಧಾ ಅದಕ್ಕೆ ಒಪ್ಪದೇ, ತಾನು ಮದುವೆಯಾಗಲು ಮನೆ ಬಿಟ್ಟಿದ್ದೆ.. ಈಗ ಮದುವೆ ಆಗದೇ ಮನೆಗೆ ವಾಪಸ್ ಹೋಗಲಾರೆ ಎಂದಿದ್ಲು.
ಕರಣ್ದೀಪ್ ಎಷ್ಟು ಮನವೊಲಿಕೆ ಮಾಡಿದ್ರು ಕರಗದ ಶ್ರದ್ಧಾಗೆ, ಫೈನಲಿ ತನ್ನನ್ನ ಮದುವೆ ಆಗುವಂತೆ ಕರಣ್ ಪ್ರಪೋಸ್ ಮಾಡಿದ್ದಾನೆ. ಇದಕ್ಕೆ ಶ್ರದ್ಧಾ ಕೂಡಾ ಓಕೆ ಎಂದು ಸೂಚನೆ ಕೊಟ್ಟಿದ್ದಾಳೆ. ನಂತರ ಇಬ್ಬರೂ ಮಹೇಶ್ವರ-ಮಂಡಲೇಶ್ವರಕ್ಕೆ ಪ್ರಯಾಣ ಬೆಳೆಸಿ. ಅಲ್ಲಿ ಮದುವೆಯಾಗಿದ್ದಾರೆ. ನಂತರ ಅಲ್ಲಿಂದ ಅವರು ಮಂದಸೌರ್ಗೆ ಹೋಗಿದ್ದಾರೆ.
ತನ್ನ ಮಗಳನ್ನ ಹುಡುಕಿಕೊಡುವವರಿಗೆ 50 ಸಾವಿರ ರೂಪಾಯಿ ಬಹುಮಾನ ಘೋಷಿಸಿದ್ರು. ಆಗಸ್ಟ್ 28 ರಂದು ಶ್ರದ್ಧಾ ಕೊನೆಗೂ ತನ್ನ ತಂದೆಗೆ ಕರೆ ಮಾಡಿ ಮಂದ್ಸೌರ್ನಲ್ಲಿ ತಾನು ಸುರಕ್ಷಿತವಾಗಿರೋ ಬಗ್ಗೆ ತಿಳಿಸಿದ್ದಾಳೆ. ಸಮಾಧಾನಗೊಂಡ ತಂದೆ ರೈಲು ಟಿಕೆಟ್ ಖರೀದಿಗೆ ಕರಣ್ದೀಪ್ಗೆ ಫೋನ್ಪೇ ಮಾಡಿದ್ದ.
ಇಂದೋರ್ಗೆ ಹಿಂತಿರುಗಿದ ಶ್ರದ್ಧಾ ಮತ್ತು ಕರಣ್ದೀಪ್ ಸೀದಾ ಎಂಐಜಿ ಪೊಲೀಸ್ ಠಾಣೆಗೆ ಹೋಗಿ ನಡೆದ ಘಟನೆ ವಿವರಿಸಿದ್ರು. ಸದ್ಯ ಶ್ರದ್ಧಾ ತಂದೆ ಅನಿಲ್ ತಿವಾರಿ, ತಮ್ಮ ಮಗಳು ವಾಪಾಸ್ ಬಂದಿರೋದಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ.