newsics.com
ಬೆಂಗಳೂರು: ಮಡೆನೂರು ಮನು ಅವರು ಇತ್ತೀಚೆಗೆ ಸಾಕಷ್ಟು ಸುದ್ದಿ ಆಗಿದ್ದರು. ಇದಕ್ಕೆ ಕಾರಣ ಆಗಿದ್ದು ಅವರು ನಡೆದು ಕೊಂಡ ರೀತಿ. ಅವರು ಶಿವರಾಜ್ಕುಮಾರ್, ದರ್ಶನ್, ಧ್ರುವ ಸೇರಿದಂತೆ ಅನೇಕ ಸೆಲೆಬ್ರಿಟಿಗಳ ಬಗ್ಗೆ ತುಚ್ಚವಾಗಿ ಮಾತನಾಡಿದ್ದರು. ಈ ಬೆನ್ನಲ್ಲೇ ಧ್ರುವ ಸರ್ಜಾ ಬಳಿ ತೆರಳಿ ಅವರು ಕ್ಷಮೆ ಕೇಳಿದ್ದರು. ಈಗ ಶಿವರಾಜ್ಕುಮಾರ್ ಕಾಲಿಗೆ ಬಿದ್ದು ಮನು ಕ್ಷಮೆ ಕೇಳಿದ್ದಾರೆ..
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಮಡೆನೂರು ಮನು, ಶಿವಣ್ಣ ಅವರನ್ನು ಭೇಟಿಯಾಗಿ ಕ್ಷಮೆ ಕೇಳಿದರು. 4-5 ಬಾರಿ ಭೇಟಿಗೆ ಯತ್ನಿಸಿದರೂ ಸಾಧ್ಯವಾಗಿರಲಿಲ್ಲ ಎಂದು ಹೇಳಿದರು. ಈ ವೇಳೆ ನಟ ಶಿವರಾಜ್ ಕುಮಾರ್, ಚಿತ್ರರಂಗದಲ್ಲಿ ಚನ್ನಾಗಿ ಬೆಳೆಯುವಂತೆ ಆಶಿರ್ವಾದ ಮಾಡಿದರು.
. ಮಡೆನೂರು ಮನು ವಿರುದ್ಧ ಚಿತ್ರರಂಗದಿಂದ ಕ್ರಮ ಕೈಗೊಳ್ಲುವಂತೆ ಒತ್ತಾಯಗಳು ಕೇಳಿಬಂದಿದ್ದವು. ಈ ಬೆಳವಣಿಗೆ ಬೆನ್ನಲ್ಲೇ ಮಡೆನೂರು ಮನು ಶಿವಣ್ಣ ಅವರ ಕ್ಷಮೆಯಾಚಿಸಿದ್ದಾರೆ.