newsics.com
ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ಆರೋಪಿಸಿ ಅನಾಮಿಕ ವ್ಯಕ್ತಿ ನೀಡಿದ ದೂರು ರಾಜ್ಯದಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿತ್ತು. ಈ ಗಂಭೀರ ಆರೋಪದ ತನಿಖೆ ತೀವ್ರಗೊಳಿಸಿದ ಎಸ್ಐಟಿ ತಂಡ ಇಂದು 13ನೇ ಸ್ಥಳದಲ್ಲಿ ಶವಶೋಧ ಕಾರ್ಯ ನಡೆಯಲಿದೆ. ದೂರುದಾರನ ನಂಬಿಕೆಯಂತೆ ಬಹಳಷ್ಟು ಶವ ಹೂತಿದ್ದು, ಇಲ್ಲಿ ಅಸ್ಥಿಪಂಜರ ಸಿಗುವ ಸಾಧ್ಯತೆ ಇದೆ ಎಂದಿದ್ದಾನೆ. ಈ ಹಿಂದೆ 12 ಸ್ಥಳಗಳಲ್ಲಿ ಶೋಧ ನಡೆಸಿದರೂ, ಒಂದೆರಡು ಕಡೆ ಬಿಟ್ಟರೆ ಬೇರೆ ಕುರುಹು ಸಿಕ್ಕಿರಲಿಲ್ಲ. ಹೀಗಾಗಿ ದೂರುದಾರನ ನಡೆಯ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.
ಇಂದು ಅಂತಿಮ 13ನೇ ಸ್ಥಳ ಅಗೆಯಲಿದ್ದಾರೆ. ಹಾಗಿದ್ರೆ ಇವತ್ತೇ ಭೂಮಿ ಅಗೆಯುವ ಕಾರ್ಯ ಕೊನೆಯಾಗುತ್ತಾ? ಹಾಗೊಮ್ಮೆ ಆದ್ರೆ ಮುಂದೇನು ಅನ್ನೋ ಕುತೂಹಲ ಮನೆ ಮಾಡಿದೆ.
ಪಾಯಿಂಟ್ ನಂಬರ್ 1 ರಲ್ಲಿ ಡೆಬಿಟ್ ಕಾರ್ಡ್, ಪಾನ್ಕಾರ್ಡ್ ಪತ್ತೆಯಾಗಿದ್ದರೆ, ಪಾಯಿಂಟ್ ನಂಬರ್ 6 ರಲ್ಲಿ 25 ಮೂಳೆ, ಬುರುಡೆ ಕುರುಹು ಪತ್ತೆಯಾಗಿದೆ. ಇದೆಲ್ಲ ಎಫ್ಎಸ್ಎಲ್ ಗೆ ರವಾನೆಯಗಿದೆ. ಪಾಯಿಂಟ್ ನಂಬರ್ 8 ರಲ್ಲಿ ಹರಿದ ಕೆಂಪು ಬಣ್ಣದ ಬ್ಲೌಸ್ ಪೀಸ್ ದೊರಕಿದೆ. ನಿನ್ನೆ 11, 12 ರಲ್ಲಿ ಯಾವುದೇ ಕಳೇಬರ ದೊರಕಿಲ್ಲ. ಇಂದು ಪಾಯಿಂಟ್ ನಂಬರ್ 13 ರಲ್ಲಿ ಅಗೆತದ ನಂತರ ಏನೂ ದೊರಕದಿದ್ದರೆ ದೂರುದಾರನ ವಿಚಾರಣೆ ಸಾಧ್ಯತೆಯಿದೆ. ಬೇರೆ ಬೇರೆ ಸ್ಥಳಗಳನ್ನು ತೋರಿಸಿ ಆ ಸ್ಥಳಗಳನ್ನು ಎಸ್ಐಟಿ ಅಧಿಕಾರಿಗಳು ಮಹಜರು ಮಾಡಲಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಹೊಸ ದೂರುಗಳು ಎಸ್ಐಟಿಗೆ ಹಸ್ತಾಂತರವಾಗಿವೆ. 6ನೇ ಸ್ಥಳದಲ್ಲಿ ಪತ್ತೆಯಾದ 25 ಮೂಳೆಗಳಿಗೆ ಸಂಬಂಧಿಸಿದಂತೆ ಧರ್ಮಸ್ಥಳ ಠಾಣೆಯಲ್ಲಿ UDR (ಅನಿರ್ಧಾರಿತ ಮರಣ) ಪ್ರಕರಣ ದಾಖಲಾಗಿದೆ. ಇದೇ ವೇಳೆ, ಸಾಮಾಜಿಕ ಕಾರ್ಯಕರ್ತ ಜಯಂತ್ ಟಿ, ಒಬ್ಬ ಬಾಲಕಿಯ ಮೃತದೇಹವನ್ನು ಮುಚ್ಚಿರುವುದನ್ನು ತಾನು ನೋಡಿದ್ದೇನೆ ಎಂದು ದೂರು ದಾಖಲಿಸಿದ್ದಾರೆ. ಈ ಎರಡು ಪ್ರಕರಣಗಳನ್ನು ಎಸ್ಐಟಿ ಮುಂದಿನ ತನಿಖೆಗೆ ಸ್ವೀಕರಿಸಿದೆ.
https://www.newsics.com/2025/08/06/big-relief-for-borrowers-repo-rate-status-quo-to-continue/