newsics.com
ನವದೆಹಲಿ: ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಅವರ ಬಾಹ್ಯಾಕಾಶ ಯಾನ ಮುಂದೂಡಿಕೆಯಾಗಿದೆ. ಜೂನ್ 10ರ ಬದಲು ಜೂನ್ 11ರ ಸಂಜೆ 5.30ಕ್ಕೆ ನಿಗಧಿಯಾಗಿದೆ.
ನಾಳೆ ಅಂದ್ರೆ ಜೂನ್ 10ರಂದು ಅಮೆರಿಕಾದ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಆಕ್ಸಿಮ್-4 ರಾಕೆಟ್ ಉಡಾವಣೆ ಆಗಬೇಕಿತ್ತು. ಭಾರತದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳು ಬಾಹ್ಯಾಕಾಶ ಯಾತ್ರೆ ಆರಂಭಿಸಲು ಸಜ್ಜಾಗಿದ್ದರು. ಆದರೆ ಪ್ರತಿಕೂಲ ಹವಾಮಾನ ಪರಿಸ್ಥಿತಿ ಕಾರಣದಿಂದ ಮುಂದೂಡಿಕೆ ಆಗಿದೆ. ಈ ಬಗ್ಗೆ ಇಸ್ರೋದಿಂದ ಅಧಿಕೃತ ಮಾಹಿತಿ ಬಿಡುಗಡೆ ಆಗಿದೆ.
1984ರಲ್ಲಿ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಅವರು ಸೋವಿಯತ್ ಒಕ್ಕೂಟದ ಸೊಯುಜ್ ಟಿ-11 ಮಿಷನ್ ಮೂಲಕ ಬಾಹ್ಯಾಕಾಶಕ್ಕೆ ತೆರಳಿದ ನಂತರ, 40 ವರ್ಷಗಳ ಬಳಿಕ ಭಾರತದಿಂದ ಮತ್ತೊಬ್ಬ ಗಗನಯಾತ್ರಿ ISSಗೆ ಪ್ರಯಾಣಿಸುತ್ತಿದ್ದಾರೆ. ಈ ಮಿಷನ್ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತು ಆಕ್ಸಿಯಮ್ ಸ್ಪೇಸ್ನ ಸಹಯೋಗದ ಫಲವಾಗಿದೆ.