newsics. com
ಬೆಂಗಳೂರು: ಜೆಪ್ಟೋಗೆ ಸರಿಯಾಗಿ ಅಡ್ರೆಸ್ ಹಾಕಿಲ್ಲ ಡೆಲಿವರಿ ಬಾಯ್ ಅಂತ ಗ್ರಾಹಕನ ಕಣ್ಣಿಗೆ ಪಂಚ್ ಕೊಟ್ಟಿರೋ ಘಟನೆ ಬಸವೇಶ್ವರ ನಗರದಲ್ಲಿ ನಡೆದಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಬಸವೇಶ್ವರನಗರದಲ್ಲಿರುವ 30 ವರ್ಷದ ಉದ್ಯಮಿ ಶಶಾಂಕ್ ಎಸ್ ದಿನಸಿ ಸಾಮಗ್ರಿಗಳನ್ನು ಆರ್ಡರ್ ಮಾಡಿದ್ದಾರೆ. ಹೀಗೆ ಶಶಾಂಕ್ ಅವರು ಅಡ್ರೆಸ್ ತಪ್ಪಾಗಿ ಕೊಟ್ಟಿದ್ದಾರಂತೆ. ಇದೇ ವಿಚಾರಕ್ಕೆ ಡೆಲಿವರಿ ಬಾಯ್ ಹಾಗೂ ಶಶಾಂಕ್ ನಡುವೆ ಗಲಾಟೆ ಶುರುವಾಗಿದೆ.
ಗ್ರಾಹಕರ ಮೇಲೆ ಡೆಲಿವರಿ ಬಾಯ್ ವಿಷ್ಣುವರ್ಧನ ಹಲ್ಲೆ ಮಾಡಿದ್ದಾನೆ. ವಿಷ್ಣುವರ್ಧನ ಜೋರಾಗಿ ಕೈಯಿಂದ ಕಣ್ಣಿಗೆ ಗುದ್ದಿದ ಪರಿಣಾಮ ಕಣ್ಣಿನ ಕೆಳಗಿನ ಮೂಳೆ ಕಟ್ ಆಗಿದೆ. ಸದ್ಯ ಈ ಘಟನೆ ಸಂಬಂಧ ಬಸವೇಶ್ವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.