newsics.com
2023ರಿಂದ ಬಾಲಿವುಡ್ನ ಹಾರ್ಟ್ಥ್ರೋಬ್ ಕಾರ್ತಿಕ್ ಆರ್ಯನ್ ನನ್ನು ಮ್ಯಾನ್ಫೋರ್ಸ್ ಕಾಂಡಮ್ಗಳ ಬ್ರ್ಯಾಂಡ್ ರಾಯಭಾರಿಯಾಗಿ ನೇಮಿಸಲಾಗಿದೆ. ಮ್ಯಾನ್ಕೈಂಡ್ ಫಾರ್ಮಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಹ-ಸಂಸ್ಥಾಪಕ ರಾಜೀವ್ ಜುನೇಜಾ, ಕಾರ್ತಿಕ್ ಅವರನ್ನು ಏಕೆ ಆಯ್ಕೆ ಮಾಡಲಾಗಿದೆ ಎಂಬುದನ್ನು ಈಗ ಬಹಿರಂಗಪಡಿಸಿದ್ದಾರೆ.
ಇತ್ತೀಚೆಗೆ ಪಾಡ್ಕಾಸ್ಟ್ ಒಂದರಲ್ಲಿ ಭಾಗವಹಿಸಿದ್ದ ರಾಜೀವ್ ಜುನೇಜಾ, ಸನ್ನಿ ಲಿಯೋನ್ ಬದಲು ಮ್ಯಾನ್ಫೋರ್ಸ್ಗೆ ಕಾರ್ತಿಕ್ ಆರ್ಯನ್ರನ್ನು ಆಯ್ಕೆ ಮಾಡಿದ್ದೇಕೆ ಅನ್ನೋದನ್ನು ತಿಳಿಸಿದರು. ‘ಕಾರ್ತಿಕ್ ಆರ್ಯನ್ರನ್ನು ಆಯ್ಕೆ ಮಾಡಿದ ಏಕೈಕ ಕಾರಣವೇನೆಂದರೆ, ನಾವು ಒಮ್ಮೊಮ್ಮೆ ಪುರುಷರ ಒಳ ಹೊಕ್ಕಬೇಕಾಗುತ್ತದೆ’ ಅದಕ್ಕಾಗಿ ಅವರನ್ನು ಆಯ್ಕೆ ಮಾಡಿದೆವು. ನಮ್ಮ ಪಾರ್ಟ್ನರ್ಷಿಪ್ ಮೂಲಕ, ಕಾರ್ತಿಕ್ ಮತ್ತು ಮ್ಯಾನ್ಫೋರ್ಸ್ ಲೈಂಗಿಕ ಸಂಭೋಗದಲ್ಲಿ ಒಪ್ಪಿಗೆಯ ಮಹತ್ವದ ಬಗ್ಗೆ ಯುವಕರಿಗೆ ಶಿಕ್ಷಣ ನೀಡುವ ಗುರಿಯನ್ನು ಹೊಂದಿದ್ದಾರೆ.
ಇಲ್ಲಿಯವರೆಗೂ ನಿಮ್ಮ ಪ್ರಾಡಕ್ಟ್ನಲ್ಲಿ ಭಾಗಿಯಾದ ಯಾವ ನಟ-ನಟಿಯರನ್ನು ನೀವು ಈಗ ಆಯ್ಕೆ ಮಾಡಲು ಬಯಸುತ್ತೀರಿ ಅನ್ನೋ ಪ್ರಶ್ನೆಗೆ,’ಕಾಂಡಮ್ ಜಾಹೀರಾತಿಗಾಗಿಯೇ? ಯಾವುದಕ್ಕಾಗಿ? ಹಾಗಿದ್ರೆ ಜಾಹ್ನವಿ ಕಪೂರ್. ಆಕೆ ಅದ್ಭುತವಾಗಿ ಒಪ್ಪಿಕೊಳ್ಳುತ್ತಾರೆ. ಆಕೆ ಬೆಸ್ಟ್ ಚಾಯ್ಸ್ ಆಗೋದು ಗ್ಯಾರಂಟಿ’ ಎಂದು ಹೇಳಿದ್ದಾರೆ.
ಕಾರ್ತಿಕ್ ಆರ್ಯನ್ರ್ನು ಬಿಟ್ಟು ಬೇರೆ ಯಾವುದಾದರೂ ಪುರುಷ ನಟರನ್ನು ನಿಮ್ಮ ಜಾಹೀರಾತಿಗೆ ಸೆಲೆಕ್ಟ್ ಮಾಡುವುದಾದರೆ ಯಾರನ್ನು ಮಾಡುತ್ತೀರಿ ಅನ್ನೋ ಪ್ರಶ್ನೆಗೆ ರಣಬೀರ್ ಕಪೂರ್ ಎಂದು ಉತ್ತರಿಸಿದರು. ಇನ್ನು ಯುವಕರ ಟಾರ್ಗೆಟ್ ಮಾಡಲು ಕಿಲ್ನಿಂದ ಪ್ರಖ್ಯಾತರಾದ ಲಕ್ಷ್ಯರನ್ನು ಆಯ್ಕೆ ಮಾಡೋದಾಗಿ ತಿಳಿಸಿದರು. ಬಾಲಿವುಡ್ನ ಡೆಬ್ಯೂಟ್ ಸಿನಿಮಾದಲ್ಲಿ ಲಕ್ಷ್ಯ ಅವರ ನಟನೆಯನ್ನು ಮೆಚ್ಚಿದ್ದಾರೆ.
ಮ್ಯಾನ್ಕೈಂಡ್ ಫಾರ್ಮಾ ಮಾಲೀಕತ್ವದ ಮತ್ತೊಂದು ಉತ್ಪನ್ನವಾದ ಪ್ರೀಗಾ ನ್ಯೂಸ್ ಪ್ರೆಗ್ನೆನ್ಸಿ ಟೆಸ್ಟ್ ಕಿಟ್ ಬಗ್ಗೆ ಮಾತನಾಡಿದ ರಾಜೀವ್, ಪ್ರಸ್ತುತ ಬ್ರಾಂಡ್ ರಾಯಭಾರಿ ಅನುಷ್ಕಾ ಶರ್ಮಾ ಅವರನ್ನು ಶಿಸ್ತುಬದ್ಧ ಮತ್ತು ವೃತ್ತಿಪರ ವ್ಯಕ್ತಿ ಎಂದು ಹೇಳುವ ಮೂಲಕ ಆಕೆ ಪರಿಪೂರ್ಣ ಆಯ್ಕೆ ಎಂದರು. ಬ್ರ್ಯಾಂಡ್ಗೆ ಮುಂದಿನ ಉತ್ತಮ ಆಯ್ಕೆ ದೀಪಿಕಾ ಪಡುಕೋಣೆ ಎಂದು ರಾಜೀವ್ ಹೇಳಿದರು.