newsics.com
ಬೆಂಗಳೂರು : ತಮಿಳುನಾಡಿನಲ್ಲಿ ಉಂಟಾದ ಫೆಂಗಲ್ ಚಂಡಮಾರುತದ ಪರಿಣಾಮ ಕರ್ನಾಟಕದ ಮೇಲು ಬೀರಿದೆ. ಕಳೆದ ಹಲವಾರು ದಿನಗಳಿಂದ ರಾಜ್ಯದ ಹಲವು ಭಾಗಗಳಲ್ಲಿ ಹಲವಾರು ಅವಾಂತರ ಸೃಷ್ಟಿಯಾಗಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಏಕಾಏಕಿ ತರಕಾರಿ ಬೆಲೆ ಏರಿಕೆಯಾಗಿದೆ.
ಹೌದು ಫೆಂಗಲ್ ಚಂಡಮಾರುತದಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ತರಕಾರಿ ಇಳುವರಿ ಮೇಲೆ ಪರಿಣಾಮ ಬೀರಿದೆ.
ಇದರಿಂದಾಗಿ ಮಾರುಕಟ್ಟೆಗೆ ಪೂರೈಕೆ ಗಣನೀಯವಾಗಿ ಇಳಿದಿದ್ದು, ತರಕಾರಿ ಬೆಲೆ ಗಗನಕ್ಕೇರಿದೆ. ದಿಢೀರ್ ತರಕಾರಿ ಬೆಲೆ ಏರಿಕೆಯಿಂದಾಗಿ ಜನರ ಜೇಬಿಗೆ ಮತ್ತಷ್ಟು ಕತ್ತರಿ ಬಿದ್ದಿದೆ.
ಟೊಮ್ಯಾಟೋ ಕೆಜಿಗೆ 60 ರಿಂದ 70 ಏರಿಕೆಯಾಗಿದೆ, ಅದೇ ರೀತಿಯಾಗಿ ನುಗ್ಗೇಕಾಯಿ 500 ರೂ, ಬಟಾಣಿ, ಕೆಜಿಗೆ 180 ರಿಂದ 200 ರೂ, ಮೆಣಸಿನಕಾಯಿ ಕೆಜಿಗೆ 40 ರಿಂದ 50 ರೂ, ಆಲೂಗಡ್ಡೆ ಕೆಜಿಗೆ 35 ರಿಂದ 40 ರೂ, ಬೀನ್ಸ್ ಕೆಜಿಗೆ 60 ರೂ, ಕ್ಯಾರೆಟ್ ಕೆಜಿಗೆ 60 ರಿಂದ 80 ರೂ, ಹಾಗೂ ಗ್ರೀನ್ ಕ್ಯಾಪ್ಸಿಕ್ಸಂ ಕೆಜಿಗೆ 50 ರೂಪಾಯಿ ಏರಿಕೆ ಕಂಡಿವೆ.