ಮೇರು ಉದ್ಯಮಿಗೆ ಭಾವನಾತ್ಮಕ ವಿದಾಯ: ಜನಮಾನಸದ ನೆನಪಿನಂಗಳಕ್ಕೆ ಜಾರಿದ ಭಾರತದ ರತ್ನ ಟಾಟಾ

newsics.com ಮುಂಬೈ: ಬುಧವಾರ ರಾತ್ರಿ ಇಹಲೋಕ ತ್ಯಜಿಸಿದ ರತನ್ ಟಾಟಾ ಗುರುವಾರ ಸಂಜೆ ಪಂಚಭೂತಗಳಲ್ಲಿ ಲೀನರಾದರು. ಈ‌ ಮೂಲಕ ಜನೋಪಕಾರಿ ಮೇರು ಉದ್ಯಮಿ, ಭಾರತದ ರತ್ನ ರತನ್ ಟಾಟಾ ಜನಮಾನಸದ ನೆನಪಿನಂಗಳಕ್ಕೆ ಜಾರಿದರು. ಪಾರ್ಸಿ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತಾದರೂ ರತನ್ ಟಾಟಾ ಅವರ ಇಚ್ಛೆಯಂತೆ ಪಾರ್ಥಿವ ಶರೀರವನ್ನು ದಹನ ಮಾಡಲಾಯಿತು ಎಂದು ಸ್ಮಶಾನದಲ್ಲಿದ್ದ ಅರ್ಚಕರೊಬ್ಬರು ತಿಳಿಸಿದ್ದಾರೆ. ಧೀಮಂತ ಉದ್ಯಮಿ-ಪರೋಪಕಾರಿ ರತನ್ ಟಾಟಾ ಅವರ ಅಂತ್ಯಕ್ರಿಯೆಯನ್ನು ಮುಂಬೈನ ವರ್ಲಿ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಗುರುವಾರ ನೆರವೇರಿಸಲಾಯಿತು. … Continue reading ಮೇರು ಉದ್ಯಮಿಗೆ ಭಾವನಾತ್ಮಕ ವಿದಾಯ: ಜನಮಾನಸದ ನೆನಪಿನಂಗಳಕ್ಕೆ ಜಾರಿದ ಭಾರತದ ರತ್ನ ಟಾಟಾ