newsics.com
ಬಿಗ್ ಬಾಸ್ ಕನ್ನಡ -11 (Bigg Boss Kannada-11) ಗ್ರ್ಯಾಂಡ್ ಆಗಿ ಆರಂಭವಾಗಿದೆ.
ಒಟ್ಟು 17 ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಹೋಗಿದ್ದಾರೆ. ಈ ಪೈಕಿ 10 ಮಂದಿ ಸ್ವರ್ಗ, ಏಳು ಸ್ಪರ್ಧಿಗಳು ನರಕದ ಮನೆ ಪ್ರವೇಶಿಸಿದ್ದಾರೆ. ಹೊರ ಪ್ರಪಂಚದಲ್ಲಿ ಹಾಯಾಗಿದ್ದ ಸ್ಪರ್ಧಿಗಳು ಮೊದಲ ದಿನವೇ ಬಿಗ್ ಬಾಸ್ ಮನೆಗೆ ಹೊಂದಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.
ತಮ್ಮ ಇಷ್ಟದಂತೆ ಬದುಕಿ ಬಂದಿರುವ ಮಂದಿ ಬಿಗ್ ಬಾಸ್ ಲೈಫ್ಗೆ ಹೊಂದಿಕೊಳ್ಳುವ ಯತ್ನದಲ್ಲಿದ್ದಾರೆ ಎಂದು ಇಂದು ರಾತ್ರಿ (ಸೆ.30ರಂದು) ಪ್ರಸಾರವಾಗುವ ಪ್ರೋಮೊದಲ್ಲಿ ತೋರಿಸಲಾಗಿದೆ.
ಬಿಗ್ಬಾಸ್ 10ನ್ನು ಜೈಲಲ್ಲಿ ನೋಡಿದ್ದ ಚೈತ್ರಾ ಕುಂದಾಪುರ ಈ ಸೀಸನ್ನ ಸ್ಪರ್ಧಿ ಎಂಬುದು ವಿಶೇಷ. ವಕೀಲ ಜಗದೀಶ್ ಕೂಡ ಈ ಹಿಂದೆ ಜೈಲಲ್ಲಿದ್ದು ಬಂದವರು ಎಂಬುದು ಗೊತ್ತಾಗಿದೆ.
ಮೈಮೇಲೆ ಸುಮಾರು ಮೂರುವರೆ ಕೋಟಿ ಮೌಲ್ಯದ ಚಿನ್ನ ಧರಿಸಿ ಬಂದ ಉತ್ತರ ಕರ್ನಾಟಕ ಮೂಲದ ಸುರೇಶ್ ಅಲಿಯಾಸ್ ಗೋಲ್ಡ್ ಸುರೇಶ್ ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ಚಿನ್ನಾಭರಣಗಳನ್ನು ತೆಗೆದಿಟ್ಟಿದ್ದಾರೆ.
https://www.instagram.com/reel/DAhkv6jqBGc/?igsh=N3hlcjdtMnI2MG01
https://www.instagram.com/p/DAgnO4RtYnu/?igsh=MXg5anFlOGNzaGZpeQ==
https://www.instagram.com/p/DAgntbrxojo/?igsh=MW1ncHR5bGh1cXJ4Nw==