newsics.com
ಪ್ರಯಾಗ್ ರಾಜ್: ತಿರುಪತಿ ಲಡ್ಡು ವಿವಾದ ಬೆನ್ನಲ್ಲೇ ಅಯೋಧ್ಯೆ, ಪ್ರಯಾಗ್ ರಾಜ್ ನ ದೇವಾಲಯದ ಅಧಿಕಾರಿಗಳು, ಮಿಠಾಯಿ ನೈವೇದ್ಯಗಳಿಗೆ ಬ್ರೇಕ್ ಹಾಕಿದ್ದಾರೆ.
ಹೌದು, ಭಕ್ತಾದಿಗಳಿಗೆ ಸಿಹಿ ತಿನಿಸುಗಳು ಹಾಗೂ ಮಿಠಾಯಿಗಳಂತಹ ಸಂಸ್ಕರಿಸಿದ ಪದಾರ್ಥಗಳನ್ನು ತರುವುದಕ್ಕೆ ಅಧಿಕಾರಿಗಳು ನಿರ್ಬಂಧ ವಿಧಿಸಿದ್ದಾರೆ. ಅಲ್ಲದೇ, ಇವುಗಳ ಬದಲಿಗೆ ತೆಂಗಿನಕಾಯಿ, ಹಣ್ಣು ಹಾಗೂ ಡ್ರೈ ಫ್ರೂಟ್ಸ್ ಗಳನ್ನು ತರುವಂತೆ ದೇವಾಲಯಗಳ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಸಂಗಮ ನಗರದಲ್ಲಿರುವ ಅಲೋಪ್ ಶಂಕರಿ ದೇವಿ, ಬಡೇ ಹನುಮಾನ್, ಮನ್ ಕಾಮೇಶ್ವರ್ ಸೇರಿದಂತೆ ಪ್ರಮುಖ ದೇವಾಲಯಗಳಲ್ಲಿ ಸಿಹಿ ತಿನಿಸುಗಳನ್ನು ತರುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.