ಲಡ್ಡು ಜಿಡ್ಡು ಲಡಾಯಿ: ಇಂದಿನಿಂದ 11 ದಿನ ಪ್ರಾಯಶ್ಚಿತ್ತ ದೀಕ್ಷೆ- ಡಿಸಿಎಂ ಪವನ್ ಕಲ್ಯಾಣ್

newsics.com ಗುಂಟೂರು(ಆಂಧ್ರಪ್ರದೇಶ): ತಿರುಪತಿ ಲಡ್ಡು ತಯಾರಿಕೆಯಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಬಳಸಿರುವುದಕ್ಕೆ ವೆಂಕಟೇಶ್ವರ ದೇವರಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು 11 ದಿನಗಳ ಪ್ರಾಯಶ್ಚಿತ್ತ ದೀಕ್ಷೆ ಕೈಗೊಳ್ಳುವುದಾಗಿ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಶನಿವಾರ ಹೇಳಿದ್ದಾರೆ. ಗುಂಟೂರು ಜಿಲ್ಲೆಯ ನಮ್ಮೂರಿನ ಶ್ರೀ ದಶಾವತಾರ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರದಿಂದ(ಸೆ.22) ಶಾಸ್ತ್ರೋಕ್ತವಾಗಿ ಪ್ರಾಯಶ್ಚಿತ್ತ ದೀಕ್ಷೆ ಆರಂಭಿಸುವುದಾಗಿ ನಟ-ರಾಜಕಾರಣಿ ತಿಳಿಸಿದ್ದಾರೆ. 11 ದಿನಗಳ ಪ್ರಾಯಶ್ಚಿತ್ತ ದೀಕ್ಷೆ ಕೈಗೊಂಡ ನಂತರ, ನಾನು ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳುತ್ತೇನೆ … Continue reading ಲಡ್ಡು ಜಿಡ್ಡು ಲಡಾಯಿ: ಇಂದಿನಿಂದ 11 ದಿನ ಪ್ರಾಯಶ್ಚಿತ್ತ ದೀಕ್ಷೆ- ಡಿಸಿಎಂ ಪವನ್ ಕಲ್ಯಾಣ್