ಆಂಬುಲೆನ್ಸ್ ಸಿಗದೆ ಬೈಕ್‌ನಲ್ಲೇ ವೃದ್ದನ ಶವ ಸಾಗಣೆ!

newsics.com ಪಾವಗಡ(ತುಮಕೂರು): ಆಂಬುಲೆನ್ಸ್ ಸಿಗದೆ ವೃದ್ದನ ಮೃತದೇಹವನ್ನು ಆತನ ಮಕ್ಕಳು ಬೈಕ್ ನಲ್ಲಿ ಕೊಂಡೊಯ್ದ ಹೃದಯವಿದ್ರಾವಕ ಘಟನೆ ಪಾವಗಡ ತಾಲೂಕಿನ ವೈ ಎನ್ ಹೊಸಕೋಟೆಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ದಳವಾಯಿಹಳ್ಳಿ ಗ್ರಾಮದ ಗುಡುಕಲ್ಲು ಹೊನ್ನೂರಪ್ಪ (80 ವರ್ಷ) ಅವರನ್ನು ವೈ.ಎನ್.ಹೋಸಕೋಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿದೆ. ತಪಾಸಣೆ ವೇಳೆ ವ್ಯಕ್ತಿಯು ಮೃತಪಟ್ಟಿರುವುದು ದೃಢವಾಗಿದೆ. ನಂತರ ಮೃತ ಹೊನ್ನೂರಪ್ಪರ ಶವವನ್ನು ಸಾಗಿಸಲು ಆಂಬುಲೆನ್ಸ್ ಗಾಗಿ ಹುಡುಕಾಟ ನಡೆಸಲಾಗಿದೆ. ವೈದ್ಯರ ಬಳಿ ಈ ಬಗ್ಗೆ ಚರ್ಚಿಸಲಾಗಿದ್ದು, … Continue reading ಆಂಬುಲೆನ್ಸ್ ಸಿಗದೆ ಬೈಕ್‌ನಲ್ಲೇ ವೃದ್ದನ ಶವ ಸಾಗಣೆ!