ಮಾನ್ವಿ ಬಳಿ ಶಾಲಾ ವಾಹನ, KSRTC ಬಸ್ ಡಿಕ್ಕಿ: ಇಬ್ಬರು ವಿದ್ಯಾರ್ಥಿಗಳ ಸಾವು, 12 ಮಕ್ಕಳಿಗೆ ಗಾಯ

newsics.com ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಶಾಲಾ ಬಸ್ ಮತ್ತು ರಾಜ್ಯ ರಸ್ತೆ ಸಾರಿಗೆ ಬಸ್ ನಡುವೆ ಅಪಘಾತ ಸಂಭವಿಸಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಮೂವರ ಸ್ಥಿತಿ ಚಿಂತಾಜನಕವಾಗಿದೆ. 12 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಋತ್ವಿಕ್ ಹಾಗೂ ಮಂಜುನಾಥ ಮೃತ ವಿದ್ಯಾರ್ಥಿಗಳು. ಶಾಲಾ ವಾಹನದ ಚಾಲಕ ಬಲವಂತ್ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಿತಿ ಗಂಭೀರವಾಗಿದೆ. ಓರ್ವ ವಿದ್ಯಾರ್ಥಿಯ ಎರಡೂ ಕಾಲುಗಳು ತುಂಡಾಗಿವೆ. ಇನ್ನೋರ್ವ ವಿದ್ಯಾರ್ಥಿಯ ಎಡಗಾಲು ತುಂಡಾಗಿದೆ. ಗಾಯಗೊಂಡಿರುವ ಎಲ್ಲ ವಿದ್ಯಾರ್ಥಿಗಳನ್ನು … Continue reading ಮಾನ್ವಿ ಬಳಿ ಶಾಲಾ ವಾಹನ, KSRTC ಬಸ್ ಡಿಕ್ಕಿ: ಇಬ್ಬರು ವಿದ್ಯಾರ್ಥಿಗಳ ಸಾವು, 12 ಮಕ್ಕಳಿಗೆ ಗಾಯ