newsics.com
ಒಡಿಶಾ: ಪುರಾತನ ಜಗನ್ನಾಥ ಮಂದಿರದಲ್ಲಿರುವ ರತ್ನ ಭಂಡಾರದ ಬಾಗಿಲನ್ನು ಬರೋಬ್ಬರಿ 46 ವರ್ಷಗಳ ಬಳಿಕ ತೆರೆಯಲಾಗಿದೆ. ಈ ರತ್ನ ಭಂಡಾರದ ರಹಸ್ಯ ಇಡೀ ದೇಶದ ಕುತೂಹಲ ಕೆರಳಿಸಿದೆ.
ಕೊಠಡಿಯ ದ್ವಾರ ತೆರೆಯಲಾಗಿದೆ. ಇದುವರೆಗೂ ದೇವಾಲಯದ 16 ಜನರ ವಿಶೇಷ ತಂಡ ರತ್ನ ಭಂಡಾರ ಕೋಣೆಯನ್ನು ಶೋಧ ನಡೆಸುತ್ತಿದೆ.
ಇಂದು ಮಧ್ಯಾಹ್ನ ರತ್ನ ಭಂಡಾರ ಬಾಗಿಲು ತೆಗೆಯುತ್ತಿದ್ದಂತೆ ದೇವಾಲಯದಲ್ಲಿದ್ದ ಎಸ್ಪಿ ಪಿನಾಕ್ ಮಿರ್ಶಾ ಅವರು ಮೂರ್ಛೆ ಬಿದ್ದಿದ್ದರು. ಮೂರ್ಛೆ ಬೀಳುತ್ತಿದ್ದಂತೆ ಸ್ಥಳದಲ್ಲೇ ಎಸ್ಪಿಗೆ ಚಿಕಿತ್ಸೆ ನೀಡಲಾಗಿತ್ತು. ನಂತರ ಸಿಬ್ಬಂದಿಗಳು ಎಸ್ಪಿಯನ್ನು ಹೊರಗಡೆ ಕರೆತಂದು ಚಿಕಿತ್ಸೆ ನೀಡಲಾಗಿತ್ತು
ಆ ಸಮಯದಲ್ಲಿ ನನಗೆ ಏನಾಯ್ತೋ ಗೊತ್ತಿಲ್ಲ. ಸದ್ಯ ನಾನು ಆರೋಗ್ಯವಾಗಿದ್ದೇನೆ. ನನಗೆ ಯಾವುದೇ ತೊಂದರೆ ಇಲ್ಲ. ನಿಮ್ಮ ಮುಂದೆಯೇ ನಿಂತು ಮಾತನಾಡುತ್ತಿದ್ದೇನೆ ಎಂದು ಎಸ್ಪಿ ಪಿನಾಕ್ ಮಿರ್ಶಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.