ವರುಣಾರ್ಭಟಕ್ಕೆ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆ ಜನ ತತ್ತರ, ಹಲವು ಗ್ರಾಮ ಜಲಾವೃತ

newsics.com ದಕ್ಷಿಣ ಕನ್ನಡ: ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಹಲವೆಡೆ ಬುಧವಾರದಿಂದ ನಿರಂತರವಾಗಿ ಸುರಿದ ಮಳೆಗೆ ಹಲವು ಗ್ರಾಮಗಳು ಜಲಾವೃತಗೊಂಡು ಭಾರೀ ಪ್ರಮಾಣದ ಆಸ್ತಿ ಪಾಸ್ತಿಗೆ ಹಾನಿಯಾಗಿದೆ. ಬೈಂದೂರು ಕ್ಷೇತ್ರದ ನಾವುಂದ ಸಾಲ್ಬುಡ ಮತ್ತು ಕಾವ್ರಾಡಿ ಭಾಗದ ಹತ್ತಾರು ಹಳ್ಳಿಗಳು ನೆರೆಪ್ರಕೋಪಕ್ಕೆ ನಲುಗಿವೆ. ಸಾವಿರಾರು ಎಕರೆ ಕೃಷಿಭೂಮಿ, ಕೃಷಿತೋಟ ಜಲಾವೃತಗೊಂಡಿದೆ. ಮಾರಣಕಟ್ಟೆಯ ಬ್ರಹ್ಮಗುಂಡಿ, ಕಮಲಶಿಲೆಯ ಕುಬ್ಜಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಬ್ರಹ್ಮಗುಂಡಿ ನದಿ ಉಕ್ಕಿ ಹರಿದು ಮಾರಣಕಟ್ಟೆ ದೇವಳ ಪ್ರವೇಶಿಸಿದೆ. … Continue reading ವರುಣಾರ್ಭಟಕ್ಕೆ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆ ಜನ ತತ್ತರ, ಹಲವು ಗ್ರಾಮ ಜಲಾವೃತ